ಮೂರು ಯುವಕರ ಕೊಲೆ: ಕಾಶ್ಮೀರದ ಬಾರಮುಲ್ಲಾದಲ್ಲಿ ಪ್ರತಿಭಟನೆ

ಕಾಶ್ಮೀರದ ಬಾರಮುಲ್ಲಾದ ಸೇಬು ತೋಟದಲ್ಲಿ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಶಂಕಿಸಲಾದ ಮೂವರು ಯುವಕರ ದೇಹ ಸೋಮವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಶ್ರೀನಗರ: ಕಾಶ್ಮೀರದ ಬಾರಮುಲ್ಲಾದ ಸೇಬು ತೋಟದಲ್ಲಿ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಶಂಕಿಸಲಾದ ಮೂವರು ಯುವಕರ ದೇಹ ಸೋಮವಾರ ಪತ್ತೆಯಾದ ಹಿನ್ನಲೆಯಲ್ಲಿ ಆ ಪ್ರದೇಶದಲ್ಲಿ ಪ್ರತಿಭಟನೆಗಳು ಜರುಗಿವೆ.

ಸೋಫೋರ್ ಮತ್ತು ಬಾರಾಮುಲ್ಲಾ ನಗರಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಉದ್ವಿಘ್ನತೆ ಏರ್ಪಟ್ಟಿದ್ದು, ಪ್ರತಿಭಟನಾಕಾರರು ಶ್ರೀನಗರ-ಮುಜಪ್ಫರಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಪಟ್ಟನ್ ಮತ್ತು ಕ್ರೀರಿ ಪ್ರದೇಶಗಳಲ್ಲಿ ತಡೆ ಹಾಕಿದ್ದಾರೆ. ಈ ಮುಂಜಾನೆ ೧೭ ವರ್ಷದಿಂದ ೨೧ ವರ್ಷದ ನಡುವಿನ ಮೂರು ಯುವಕರ ದೇಹ ಪಟ್ಟನ್ ಗ್ರಾಮದ ಸೇಬಿನ ತೋಟದಲ್ಲಿ ಕಂಡುಬಂದ ಹಿನ್ನಲೆಯಲ್ಲಿ ಈ ಉದ್ವಿಘ್ನತೆ ಏರ್ಪಟ್ಟಿದೆ.

ಈ ಮೂವರು ಯುವಕರ ಸಾವಿನ ಸುದ್ದಿ ಜಿಲ್ಲೆಯಲ್ಲಿ ಹಬ್ಬಿದಂತೆ ಪ್ರತಿಭಟನಾಕಾರರು ಸೋಫೋರ್ ಮತ್ತು ಬಾರಾಮುಲ್ಲ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಿದ್ದಾರೆ.

ಮೃತದೇಶಗಳ ಶವಪರೀಕ್ಷೆಗಾಗಿ ಪೊಲೀಸರು ಶವಗಳನ್ನು ಬಾರಮುಲ್ಲಾ ಜಿಲ್ಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತಪಟ್ಟವರನ್ನು ಇನ್ನೂ ಗುರುತಿಸಲಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com