ಅಸಾರಾಮ್ ಬಾಪುವಿಗೆ ಜಾಮೀನು ಅರ್ಜಿ ನಿರಾಕರಿಸಿರುವುದು ಇದು ಒಂಭತ್ತನೇ ಬಾರಿ. ಕಳೆದ ತಿಂಗಳು ಹೈಕೋರ್ಟ್ ಮಧ್ಯಂತರ ಜಾಮೀನು ಅರ್ಜಿಯನ್ನು ಕೂಡ ವಜಾಗೊಳಿಸಿತ್ತು.
ಜಾಮೀನು ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ ನ್ಯಾಯಾಧೀಶ ನಿರ್ಮಲ್ ಜೀತ್ ಕೌರ್, ಸದ್ಯಕ್ಕೆ ಈ ಪ್ರಕರಣದ ವಿಚಾರಣೆ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಜಾಮೀನು ನೀಡುವುದು ಸಮರ್ಪಕವಲ್ಲ ಎಂದಿದ್ದಾರೆ.
ಈ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಆಪಾದಿತನ ಪರ ವಕೀಲರ ವಾದವನ್ನು ಕೂಡ ಕೋರ್ಟ್ ನಿರಾಕರಿಸಿತು ಎಂದು ಪ್ರಾಸೆಕ್ಯೂಶನ್ ವಕೀಲ ಪಿ ಸಿ ಸೋಲಂಕಿ ಹೇಳಿದ್ದಾರೆ.
ಜೋದ್ಪುರದ ಹತ್ತಿರವಿರುವ ಮಾನೈ ಗ್ರಾಮದ ಆಶ್ರಮದಲ್ಲಿ ಈ ದೇವಮಾನವ ತಮಗೆ ಲೈಂಕಿಕ ಕಿರುಕುಳ ನೀಡಿದ್ದಾಗಿ ಬಾಲಕಿಯೊಬ್ಬರು ಆರೋಪಿಸಿದ್ದರು. ಉತ್ತರಪ್ರದೇಶದ ಶಹಜಾನ್ಪುರ ಮೂಲದ ಈ ಬಾಲಕಿ ಈ ಆಶ್ರಮದ ವಿದ್ಯಾರ್ಥಿನಿಯಾಗಿದ್ದರು.
ಆಶ್ರಮದ ವಿರುದ್ಧ ಬಾಲಕಿ ನೀಡಿದ್ದ ದೂರಿನ ಮೇರೆಗೆ ಅಸಾರಾಮ್ ಬಾಪುವನ್ನು ಜೋಧಪುರ ಪೊಲೀಸರು 31, ಆಗಸ್ಟ್ 2013 ರಲ್ಲಿ ಬಂಧಿಸಿದ್ದರು.