ತಮ್ಮ ಘೋಷಣೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' (ಎಲ್ಲರ ಜೊತೆಗೆ, ಎಲ್ಲರ ವಿಕಾಸ) ದಂತೆ ಪಕ್ಷದ ಬದ್ಧತೆಯನ್ನು ಎತ್ತಿ ಹಿಡಿಯುವುದಾಗಿ ಹೇಳಿರುವ ಅವರು, "ನಮ್ಮ ಪಕ್ಷ ಹೇಗೆ ಸಿದ್ದಾಂತಗಳಿಗೆ ಬದ್ಧವಾಗಿದೆ ಮತ್ತು ಕೌಟುಂಬಿಕ ರಾಜಕೀಯಕ್ಕೆ ವಿರೋಧವಾಗಿದೆ" ಎಂಬುದನ್ನು ವಿಶ್ವಕ್ಕೆ ಮಾದರಿಯಾಗಿ ಕಟ್ಟಿಕೊಡಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.