ಇನ್ನು ಚೆನ್ನೈಗೆ ಅಪ್ಪಳಿಸಿರುವ ವರ್ಧಾ ಚಂಡಮಾರುತದ ಪರಿಣಾಮ ನಗರಾದಾದ್ಯಂತ ಸಾವಿರಾರು ಮರಗಳು ಧರೆಗುರುಳಿದ್ದು, ಮಾಜಿ ಸಿಎಂ ಜಯಲಲಿತಾ ಅವರ ನಿವಾಸ ಪೋಯಸ್ ಗಾರ್ಡನ್ ನಲ್ಲಿ 7 ಮರಗಳು ಧರೆಗುರುಳಿದ್ದು, ಉಳಿದಂತೆ ಮಂಡವೇಲಿಯಲ್ಲಿ 23, ಗೋಪಾಲಪುರಂನಲ್ಲಿ 16, ರಾಯಪೇಟೆಯಲ್ಲಿ 59, ನುಂಗಬಾಕ್ಕಂನಲ್ಲಿ 20 ಮರಗಳು ಸೇರಿದಂತೆ ಚೆನ್ನೈನಾದ್ಯಂತ ಸಾವಿರಕ್ಕೂ ಅಧಿಕ ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ. ಇನ್ನ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈನಾದ್ಯಂತ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂತೆಯೇ ಚೆನ್ನೈನ ಎಲ್ಲ ಖಾಸಗಿ ಕಂಪನಿಗಳು ಕೂಡ ರಜೆಘೋಷಣೆ ಮಾಡಿವೆ.