ನವದೆಹಲಿ: ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಭಾರತದ ೨೪೫ ಗ್ರಾಮಗಳಿಗೆ ಫೆಬ್ರವರಿ ಮೊದಲ ವಾರದಲ್ಲಿ ವಿದ್ಯುಚ್ಛಕ್ತಿಯನ್ನು ಒದಗಿಸಲಾಗಿದೆ ಎಂದು ಕೇಂದ್ರ ಇಂಧನ ಸಚಿವಾಲಯ ಸೋಮವಾರ ತಿಳಿಸಿದೆ.
"ಹೊಸದಾಗಿ ವಿದ್ಯುಚ್ಛಕ್ತಿ ಒದಗಿಸಿರುವ ಈ ಹಳ್ಳಿಗಳ ಪೈಕಿ ೮೨ ಗ್ರಾಮಗಳು ಅಸ್ಸಾಂ, ೭೭ ಒರಿಸ್ಸಾ, ೬೯ ಜಾರ್ಖಂಡ, ೧೩ ಚತ್ತೀಸ್ ಘರ್, ೨ ತ್ರಿಪುರಾ ಮತ್ತು ೨ ಮಧ್ಯಪ್ರದೇಶ ರಾಜ್ಯಗಳಿಗೆ ಸೇರಿವೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
೨೦೧೫-೨೦೧೬ ರಲ್ಲಿ ಒಟ್ಟು ೫೦೨೭ ಗ್ರಾಮಗಳಿಗೆ ವಿದ್ಯುಚ್ಛಕ್ತಿ ಒದಗಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇಲ್ಲಿಯವರೆಗೂ ವಿದ್ಯುಚ್ಛಕ್ತಿ ಇಲ್ಲದ ೧೮,೪೫೨ ಗ್ರಾಮಗಳಿಗೆ ವಿದ್ಯುತ್ ನೀಡುವ ಯೋಜನೆಯನ್ನು ಮೇ ೧ ೨೦೧೮ರೊಳಗೆ ಸಂಪೂರ್ಣಗೊಳಿಸುವುದಾಗಿ ಸರ್ಕಾರ ತಿಳಿಸಿದೆ.
Advertisement