ನಗರದ ಶ್ರೀ ರಾಮಕೃಷ್ಣ ಮಠದಲ್ಲಿ ‘40 ವಾರಗಳ’ ಸ್ವಚ್ಛ ಮಂಗಳೂರು ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಾಯ್ಡು, ಸಿಂಗಾಪುರ ಸ್ವಚ್ಛವಾಗಿರಲು ಕಾರಣ ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲುವವರಿಗೆ ದಂಡ ವಿಧಿಸುತ್ತಿರುವುದು. ನಮ್ಮಲ್ಲಿ ಏಕಾಏಕಿ ದಂಡ ಹಾಕಲು ಸಾಧ್ಯವಿಲ್ಲ. ಸ್ವಚ್ಛ ಭಾರತ ಆಂದೋಲನದ ಮೂಲಕ ದೇಶಾದ್ಯಂತ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು. ನಂತರ ದಂಡ ಹಾಕುವ ಬಗ್ಗೆ ನಿರ್ಧರಿಸಲಾಗುವುದು ಎಂದರು,