ಚಳವಳಿ ವೇಳೆ ಆಸ್ತಿಹಾನಿಯಾದ್ರೆ ಕಾಂಗ್ರೆಸ್, ಬಿಜೆಪಿಯೇ ಹೊಣೆ: ಸುಪ್ರೀಂ

ಜನಸಾಮಾನ್ಯರಿಗೆ ತೀವ್ರ ಸಮಸ್ಯೆ ಉಂಟು ಮಾಡುವ ಚಳವಳಿಗಳ ಬಗ್ಗೆ ಕಠಿಣ ನಿಲವು ತಳೆದಿರುವ ಸುಪ್ರೀಂ ಕೋರ್ಟ್, ಚಳವಳಿ....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on
ನವದೆಹಲಿ: ಜನಸಾಮಾನ್ಯರಿಗೆ ತೀವ್ರ ಸಮಸ್ಯೆ ಉಂಟು ಮಾಡುವ ಚಳವಳಿಗಳ ಬಗ್ಗೆ ಕಠಿಣ ನಿಲವು ತಳೆದಿರುವ ಸುಪ್ರೀಂ ಕೋರ್ಟ್, ಚಳವಳಿ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾದರೆ ಬಿಜೆಪಿ, ಕಾಂಗ್ರೆಸ್ ಅಥವಾ ಇತರೆ ಯಾವುದೇ ಸಂಘಟನೆಯಾದರೂ ಹೊಣೆ ಮಾಡಲಾಗುವುದು ಎಂದು ಬುಧವಾರ ಎಚ್ಚರಿಸಿದೆ.
ಹಾರ್ದಿಕ್ ಪಟೇಲ್ ಅವರ ಮೀಸಲಾತಿ ಹೋರಾಟದಿಂದ ಉಂಟಾದ ಸಾರ್ವಜನಿಕ ಆಸ್ತಿ ಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕೋರ್ಟ್, ಆಸ್ತಿ ಹಾನಿ ಮಾಡಿದ ವ್ಯಕ್ತಿಗಳು ಅಥವಾ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದೆ.
ಯಾವುದೇ ಚಳವಳಿಯ ಹೆಸರಿನಲ್ಲಿ ರಾಷ್ಟ್ರದ ಆಸ್ತಿಪಾಸಿಗಳನ್ನು ಸುಟ್ಟು ಹಾಕುವುದಕ್ಕೆ ಮತ್ತು ರಾಷ್ಟ್ರದ ಸುಲಿಗೆ ಮಾಡಲು ನಾವು ಬಿಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ತಮ್ಮ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿ ಪಟೇಲ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಪಡಿಸುವುದು ಅಥವಾ ನಾಶ ಪಡಿಸುವ ವ್ಯಕ್ತಿಗಳನ್ನು ಶಿಕ್ಷಿಸಲು ತಾನು ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದಾಗಿ ಹೇಳಿರುವ ಕೋರ್ಟ್, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದವರು ಅಥವಾ ನಾಶ ಪಡಿಸಿದ ವ್ಯಕ್ತಿಗಳು ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ. ಅಲ್ಲದೆ ವ್ಯಕ್ತಿಗಳಷ್ಟೇ ಅಲ್ಲ, ಕಾಂಗ್ರೆಸ್, ಬಿಜೆಪಿ ಅಥವಾ ಬೇರಾವುದೇ ರಾಜಕೀಯ ಪಕ್ಷವಾದರೂ ದಂಡ ವಿಧಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com