ನವದೆಹಲಿ: ಸಂಪ್ರದಾಯವನ್ನು ಮುರಿದಿರುವ ಕೇಂದ್ರ ಸರ್ಕಾರ ೨೦೧೬-೧೭ ನೆ ಸಾಲಿನ ಸಾಮಾನ್ಯ ಬಜೆಟ್ ನ ಯಾವುದೇ ಮುದ್ರಿತ ಪ್ರತಿಗಳನ್ನು ನೀಡದೆ ಹಸಿರು ಮಾರ್ಗದತ್ತ ಮುಖ ಮಾಡಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಬಜೆಟ್ ಮಂಡನೆಯಾದ ಮೇಲೆ ಪತ್ರಕರ್ತರಿಗೆ ಸಾಮಾನ್ಯ ಬಜೆಟ್ ನ ಮುದ್ರಿತ ಪ್ರತಿಯನ್ನು ಕೊಡುವ ಪರಿಪಾಠವಿತ್ತು.
ಆದರೆ ಈ ವರ್ಷ ಮರಗಳನ್ನು ಉಳಿಸಿ ಆಂದೋಲನಕ್ಕೆ ಪೂರಕವಾಗಿ ಸಂಪ್ರದಾಯವನ್ನು ಮುರಿದಿರುವ ಸರ್ಕಾರ ಪತ್ರಕರ್ತರಿಗೆ ಮುದ್ರಿತ ಪ್ರತಿಗಳನ್ನು ನೀಡಿಲ್ಲ.
ನೂರಾರು ಪುಟಗಳುಳ್ಳ ಬಜೆಟ್ ಪ್ರತಿಗಳು, ಸರ್ಕಾರದ ಯೋಜನೆಗಳು, ಖರ್ಚು ವೆಚ್ಚ, ವಿವಿಧ ಇಲಾಖೆಗಳಿಗೆ ನೀಡಲಾಗಿರುವ ಹಣದ ವಿವರ ಇತ್ಯಾದಿಗಳ ಸವಿವರವನ್ನು ಒಳಗೊಂಡಿರುತ್ತದೆ.
Advertisement