ಆಮೇಲೆ, ನೀನು ನನ್ನ ತಾಯ್ನಾಡಿಗೆ ಮರಳಿದಾಗ ಅಲ್ಲಿರುವ ಸಹೋದರ ಸಹೋದರಿಯರಲ್ಲಿ, ನಾನು ನನ್ನ ಕೊನೆಯುಸಿರಿನವರೆಗೂ ದೇಶಕ್ಕಾಗಿ ಹೋರಾಡಿದ್ದೆ ಎಂದು ಹೇಳು. ಸ್ವಾತಂತ್ರ್ಯ ಹೋರಾಟ ಮುಂದುವರಿಯಲಿ. ಹಿಂದೂಸ್ತಾನ ಖಂಡಿತವಾಗಿಯೂ ಸ್ವತಂತ್ರವಾಗುತ್ತದೆ. ಅದನ್ನು ಯಾರೂ ಗುಲಾಮಗಿರಿಯಲ್ಲಿರಿಸಲು ಸಾಧ್ಯವಿಲ್ಲ ಎಂದರು. ಅವರನ್ನು ತಕ್ಷಣ ಹತ್ತಿರದಲ್ಲಿರುವ ನಾನ್ಮೋನ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಹೊತ್ತಲ್ಲೇ ಅವರ ಸ್ಥಿತಿ ಚಿಂತಾಜನಕವಾಗಿತ್ತು.