ನವದೆಹಲಿ: ಉಗ್ರರ ದಾಳಿಗೊಳಗಾದ ಪಠಾಣ್ಕೋಟ್ ವಾಯುನೆಲೆಯಲ್ಲಿ ಭದ್ರತಾಲೋಪವಿದೆ ಎಂದು ಉಗ್ರ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಹೇಳಿಕೆ ನೀಡಿದೆ. ಅದೇ ವೇಳೆ ರು. 50 ನೀಡಿದರೆ ಯಾರಿಗೆ ಬೇಕಾದರೂ ವಾಯುನೆಲೆಯ ಆವರಣದಲ್ಲಿ ಹಸುಗಳನ್ನು ಮೇಯಿಸಲು ಅನುಮತಿ ಇದೆ ಎಂಬ ವಿಷಯವೀಗ ಬಹಿರಂಗವಾಗಿದೆ. ವಾಯುನೆಲೆಗೆ ಈ ರೀತಿ ಅಕ್ರಮವಾಗಿ ಪ್ರವೇಶಿಸಲು ಅನುಮತಿ ನೀಡಿರುವ ನಡೆ ಬಗ್ಗೆ ಈಗ ತನಿಖೆಗಳು ನಡೆದುಬರುತ್ತಿವೆ. ಅಷ್ಟೇ ಅಲ್ಲದೆ ಉಗ್ರ ದಾಳಿಗೆ ಉಗ್ರರಿಗೆ ವಾಯುನೆಲೆಯಿಂದಲೇ ಸಹಾಯ ಲಭಿಸಿದೆ ಎಂದು ಎನ್ಐಎ ತಂಡ ಅನುಮಾನ ವ್ಯಕ್ತ ಪಡಿಸಿದೆ.