ಸೊಂಥಾ ಪ್ರಶಾಂತ್, ಪೆಪಾಪುಡಿ ವಿಜಯಕುಮಾರ್, ಶೇಷಯ್ಯ ಚೆಮುಡುಗುಂಟ ಮತ್ತು ವೆಲ್ಪುಲ ಸುಂಕಣ್ಣ ಈ ನಾಲ್ವರು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಿದ್ದರೂ, ವಸತಿಗೃಹ, ಗ್ರಂಥಾಲಯ, ಭೋಜನಾಲಯ ಮತ್ತು ವಿಶ್ವ ವಿದ್ಯಾಲಯದ ಇತರ ಸಾಮಾನ್ಯ ಪ್ರದೇಶಗಳಿಗೆ ಪ್ರವೇಶ ನಿರಾಕರಿಸಿ ವಿಶ್ವವಿದ್ಯಾಲಯ ಕಳೆದ ಡಿಸೆಂಬರ್ನಲ್ಲಿ ಆದೇಶ ಹೊರಡಿಸಿತ್ತು. ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ಗೆ ಸೇರಿದ ಈ ನಾಲ್ವರು ಪಿಎಚ್ಡಿ ವಿದ್ಯಾರ್ಥಿಗಳು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಎಬಿವಿಪಿ ವಿದ್ಯಾರ್ಥಿ ನಾಯಕ ಸುಶೀಲ್ ಕುಮಾರ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.