ನವದೆಹಲಿ: ಗಣರಾಜ್ಯೋತ್ಸವದಂದು ಭಾರತದ ಮೇಲೆ ದಾಳಿ ಮಾಡಲು ಇಸಿಸ್ ಸಂಚು ರೂಪಿಸಿದೆ ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರಾಜಧಾನಿ ನವದೆಹಲಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಭಾನುವಾರ ಸಂಜೆ ಇಲ್ಲಿನ ಲೋಧಿ ಗಾರ್ಡನ್ನಲ್ಲಿ ಇಂಡಿಯನ್ ಆರ್ಮಿ ಸ್ಟಿಕರ್ ಅಂಟಿಸಿದ್ದ ಹುಂಡೈ ಸ್ಯಾಂಟ್ರೋ ಕಾರು ಕಳವು ಆಗಿದೆ.