5 ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಈಗ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಮೋದಿ ಸಂಪುಟದಲ್ಲಿ ಆ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಮುಂದಾಗಿದೆ. ಉತ್ತರ ಪ್ರದೇಶದ ಅನುಪ್ರಿಯಾ ಪಟೇಲ್, ಅಜಯ್ ತಮ್ತಾ, ಮಹೇಂದ್ರನಾಥ್ ಪಾಂಡೆ, ಕೃಷ್ಣಾ ರಾಜ್, ರಾಜಸ್ಥಾನದ ಅರ್ಜನ್ ರಾಮ್ ಮೇಘಾವಾಲ್ ಹಾಗೂ ಪಿಪಿ ಚೌಧರಿ, ಮಹಾರಾಷ್ಟ್ರದ ಅನಿಲ್ ದೇಸಾಯಿ, ಪಶ್ಚಿಮ ಬಂಗಾಳದ ಎಸ್.ಎಸ್. ಅಹ್ಲುವಾಲಿಯಾ ಅವರು ನಾಳೆ ಮೋದಿ ಸಂಪುಟ ಸೇರುವ ಸಾಧ್ಯತೆ ಇದೆ.