ಜೂನ್ 2016 ರಲ್ಲಿ ಇದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಉತ್ತರಿಸಿತ್ತು. ಜುಲೈ 3 ರಂದು ಬರೆದಿರುವ ಪತ್ರದಲ್ಲಿ ಕೇಜ್ರಿವಾಲ್ "ನಮ್ಮ ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಅಥವಾ ಯಾವುದೇ ರಾಜ್ಯದ ಸಚಿವರು ಸರ್ಕಾರದ ಸಿಬ್ಬಂದಿಗಾಗಿ ಬೇಟಿಕೆಯಿಟ್ಟಾಗ ರಾಜಕೀಯ ದ್ವೇಷವನ್ನು ಮರೆತು ವರ್ಗಾವಣೆ ಮಾಡಿಕೊಡುವುದು ರೂಢಿ. ಆದರೆ 16 ತಿಂಗಳುಗಳ ವಿಳಂಬದ ನಂತರ, ಕೋರ್ಟ್ ಗಳು ನಾಲ್ಕು ಬಾರಿ ಸೂಚನೆ ನೀಡಿದ ಮೇಲೆಯೂ ನಮ್ಮ ಮನವಿಯನ್ನು ತಿರಸ್ಕರಿಸಿರುವುದು ಆಶ್ಚರ್ಯ ತಂದಿದೆ" ಎಂದು ಕೇಜ್ರಿವಾಲ್ ಬರೆದಿದ್ದಾರೆ.