ಆಂಕಾರ/ನವದೆಹಲಿ: ಟರ್ಕಿಯಲ್ಲಿ ಸೇನಾ ದಂಗೆಯಿಯಿಂದ ಎದ್ದಿರುವ ಗಲಭೆಯಲ್ಲಿ ಅಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆಗೆ ಟರ್ಕಿ ರಾಯಭಾರ ಕಚೇರಿ ಮುಂದಾಗಿದೆ. ಸೇನಾ ದಂಗೆಯ ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕ ಪ್ರದೇಶಗಳಿಗೆ ಬರದಂತೆ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಉಳಿಯುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ ನೀಡಿದೆ. ಅಲ್ಲದೆ ಸಹಾಯಕ್ಕಾಗಿ ತುರ್ತು ಸಹಾಯವಾಣಿಯನ್ನು ಕೂಡ ಸ್ಥಾಪಿಸಲಾಗಿದೆ.