ತಿರುನೆಲ್ವೇಲಿ: ಚೆನೈ ಐ ಟಿ ಉದ್ಯೋಗಿ ಸ್ವಾತಿ ಕೊಲೆಯ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆ ಆರೋಪಿ ರಾಮ್ ಕುಮಾರ್ ಅವರ ತಂದೆ ಪರಮಶಿವನ್ ತಿರುನೆಲ್ವೇಲಿಯ ಸೆಂಗೋಟ್ಟಿ ಪೊಲೀಸ್ ಠಾಣೆಗೆ ಮಂಗಳವಾರ ಪೆಟಿಶನ್ ನೀಡಿದ್ದು, ತಮ್ಮ ಮಗನನ್ನು ಪೊಲೀಸರು ಹಿಡಿಯುವಾಗ ಅವನ ಕತ್ತು ಕೊಯ್ದರು ಎಂದು ಆರೋಪಿಸಿದ್ದಾರೆ. ಈ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.