ನವದೆಹಲಿ: ದೇಶದ್ರೋಹ ಆರೋಪದ ಮೇಲೆ ಬಂಧಿತರಾಗಿರುವ, ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್ ಎ ಆರ್ ಗಿಲಾನಿ ಅವರ ನ್ಯಾಯಾಂಗ ಬಂಧನವನ್ನು ಗುರುವಾರ ಮಾರ್ಚ್ ೧೬ರವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೧೪ ದಿನಗಳ ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಗೀಲಾನಿಯವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಭದ್ರತೆಯ ಕಾರಣಗಳಿಂದ ವಿಚಾರಣೆ ನಡೆಸಿದ ಜಾಗವನ್ನು ಗುಪ್ತವಾಗಿ ಇಡಲಾಗಿದೆ.
ಫೆಬ್ರವರಿ ೦ ೨೦೧೩ ರಂದು ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದಕ್ಕೆ ತಪ್ಪಿತಸ್ಥನೆಂದು ಗಲ್ಲಿಗೇರಿಸಿದ ಅಫ್ಜಲ್ ಗುರು ನೆನಪಿನಲ್ಲಿ, ಫೆಬ್ರವರಿ ೧೦ ರಂದು ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು ಎಂದು ಆರೋಪಿಸಿ ಕಾಶ್ಮೀರಿ ಮೂಲದ ಈ ಮಾಜಿ ಪ್ರಾಧ್ಯಾಪಕರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಈ ಸಮಯದಲ್ಲಿ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
Advertisement