ಶಿವಸೇನೆಯ ಮುಖ್ಯಸ್ಥ ಭಾಳ್ ಠಾಕ್ರೆಯನ್ನು ಹತ್ಯೆ ಮಾಡಲು ಲಷ್ಕರೆ ಬಾಡಿಗೆ ಗೂಂಡಾಗಳನ್ನು ನಿಯೋಜಿಸಿತ್ತು. ಆದರೆ ಆ ಯೋಜನೆ ಕೈ ಜಾರಿತ್ತು. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಒಬ್ಬನನ್ನು ವಶ ಪಡಿಸಿದ್ದು, ಆತ ಅಲ್ಲಿಂದ ತಪ್ಪಿಸಿಕೊಂಡಿದ್ದ. ಈ ವಿಷಯವನ್ನು ಪೊಲೀಸ್ ಬಚ್ಚಿಟ್ಟದ್ದು ಯಾಕೆ?. ಆತ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡಿದ್ದು ಹೇಗೆ? ಇದರ ಹಿಂದೆ ಪೊಲೀಸ್ ಗೂಢಾಲೋಚನೆಗಳಿವೆ? ಇದಕ್ಕೆಲ್ಲಾ ಪೊಲೀಸರು ಮತ್ತು ಸರ್ಕಾರ ಉತ್ತರಿಸಬೇಕಾಗಿದೆ ಎಂದು ರೌತ್ ಒತ್ತಾಯಿಸಿದ್ದಾರೆ.