ಕಳೆದ ಸೋಮವಾರ ವಿಜಯ್ ಮಲ್ಯ ಅವರ ರಾಜಿನಾಮೆಯನ್ನು ತಿರಸ್ಕರಿಸಿದ್ದ ಸಭಾಪತಿಗಳು, ಕ್ರಮಬದ್ಧವಾಗಿ ರಾಜಿನಾಮೆ ಸಲ್ಲಿಸುವಂತೆ ರಾಜ್ಯಸಭೆ ಕಾರ್ಯದರ್ಶಿಗಳು ಸಾಲದ ದೊರೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಅವರು ಇಂದು ಎರಡನೇ ಬಾರಿ ಕ್ರಮಬದ್ಧವಾಗಿ ರಾಜಿನಾಮೆ ಸಲಿಸಿದ್ದರು. ಅದನ್ನು ಸಭಾಪತಿಗಳು ಅಂಗೀಕರಿಸಿದ್ದಾರೆ.