ನಗದು ಬಿಕ್ಕಟ್ಟು; ಮಣಿಪುರದಲ್ಲಿ ಬ್ಯಾಂಕ್ ಗಳು ಧ್ವಂಸ

ನಗದು ಇಲ್ಲ ಎಂಬ ಕಾರಣ ನೀಡಿ, ಮಿತಿಯಿರುವ ೨೪೦೦೦ ರೂ ದುಡ್ಡು ಕೂಡ ಹಿಂಪಡೆಯಲು ಬಿಡದ ಎಸ್ ಬಿ ಐ ಬ್ಯಾಂಕ್ ಘಟಕಗಳ ಮೇಲೆ ಕುಪಿತಗೊಂಡ ಗ್ರಾಹಕರು ದಾಳಿ ಮಾಡಿ ಧ್ವಂಸಗೊಳಿಸಿದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಇಂಫಾಲ್: ನಗದು ಇಲ್ಲ ಎಂಬ ಕಾರಣ ನೀಡಿ, ಮಿತಿಯಿರುವ ೨೪೦೦೦ ರೂ ದುಡ್ಡು ಕೂಡ ಹಿಂಪಡೆಯಲು ಬಿಡದ ಎಸ್ ಬಿ ಐ ಬ್ಯಾಂಕ್ ಘಟಕಗಳ ಮೇಲೆ ಕುಪಿತಗೊಂಡ ಗ್ರಾಹಕರು ದಾಳಿ ಮಾಡಿ ಧ್ವಂಸಗೊಳಿಸಿದ ಘಟನೆಗಳು ಮಣಿಪುರದಲ್ಲಿ ದಾಖಲಾಗಿವೆ. 
ಒಂದು ಕಡೆ ನಡೆದ ಗಲಭೆಯಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಗಾಯವಾಗಿದೆ. ಮತ್ತೊಂದು ಕಡೆ ಬ್ಯಾಂಕ್ ನ ಕಿಟಕಿ ಮತ್ತು ಬಾಗಿಲಿನ ಗಾಜುಗಳನ್ನು ಒಡೆಯಲಾಗಿದೆ. ಈ ಘಟನೆಗಳಲಿಗೆ ಸಂಬಂಧಿಸದಂತೆ ಯಾರನ್ನು ಬಂಧಿಸಲಾಗಿಲ್ಲ. 
ಮಣಿಪುರ ವಿಶ್ವವಿದ್ಯಾಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘಟಕದಲ್ಲಿ, ೨೪೦೦೦ ರೂ ಹಣ ಹಿಂಪಡೆಯಲು ನಿರಾಕರಿಸಿರುವುದರಿಂದ ಈ ಗಲಾಟೆಗೆ ಕಾರಣವಾಗಿದೆ. 
ವಾರಕ್ಕೆ ೨೪೦೦೦ ರೂ ಹಿಂಪಡೆಯುವ ಅವಕಾಶವನ್ನು ಆರ್ ಬಿ ಐ ನೀಡಿದ್ದರು, ನಗದು ಮುಗಿದುಹೋಗುತ್ತಿರುವ ಕಾರಣ ಬ್ಯಾಂಕ್ ಗಳು ಆ ಮೊತ್ತವನ್ನು ನೀಡಲು ನಿರಾಕರಿಸುತ್ತಿರುವುದು ಸಾಮಾನ್ಯವಾಗಿದೆ. 
ನವೆಂಬರ್ ೮ ರಿಂದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ಕ್ರಮವನ್ನು ಕೇಂದ್ರ ಸರ್ಕಾರ ಘೋಷಿಸಿದ್ದಾಗಿಲಿಂದಲೂ ದೇಶದಾದ್ಯಂತ ಜನ ತಮ್ಮ ಹಣ ಪಡೆಯಲು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆಗಳು ಸಾಮಾನ್ಯವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com