ಈ ಬಗ್ಗೆ ಸ್ಪಷ್ಟನೆ ನೀಡಿದ ಎ ಮಂಜು ಅವರು, ನನಗೆ ಆ ಅಧಿಕಾರಿ ವಿರುದ್ಧ ದೂರು ಬಂದಿದ್ದಕ್ಕೆ ಎಚ್ಚರಿಕೆ ನೀಡಿದ್ದೆ. ತಪ್ಪು ತಿದ್ದಿಕೊಳ್ಳದೆ ಕೆಲಸ ಬಿಟ್ಟರೆ ಅದಕ್ಕೆ ನಾನು ಜವಾಬ್ದಾರನಲ್ಲ. ತಪ್ಪು ತಿದ್ದಿಕೋ, ಇಲ್ಲ ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದೆ. ಒಬ್ಬ ಸಚಿವನಾಗಿ ಅಧಿಕಾರಿಗಳಿಗೆ ಇಷ್ಟು ಹೇಳಬಾರದೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಾನು ಮೋಹನ್ ದಾಸ್ ಗೆ ಯಾವುದೇ ಧಮ್ಕಿ ಹಾಕಿಲ್ಲ ಎಂದು ಮಂಜು ಸ್ಪಷ್ಟನೆ ನೀಡಿದ್ದಾರೆ.