ನಾನು ಹಾಸನ ಅಧಿಕಾರಿಗೆ ಧಮ್ಕಿ ಹಾಕಿಲ್ಲ: ಸಚಿವ ಎ ಮಂಜು ಸ್ಪಷ್ಟನೆ

ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ದಾಸ್ ಅವರಿಗೆ ಧಮ್ಕಿ ಹಾಕಿಲ್ಲ ಎಂದು ಪಶುಸಂಗೋಪನಾ ಸಚಿವ...
ಎ.ಮಂಜು
ಎ.ಮಂಜು
ಬೆಂಗಳೂರು: ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ದಾಸ್ ಅವರಿಗೆ ಧಮ್ಕಿ ಹಾಕಿಲ್ಲ ಎಂದು ಪಶುಸಂಗೋಪನಾ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ನೀನು ಭ್ರಷ್ಟಾಚಾರ ಮಾಡಿದ್ದೀಯಾ ಎಂದು ಸಚಿವರು ಧಮ್ಕಿ ಹಾಕಿದ್ದಾರೆ ಎಂದು ಮೋಹನ್ ದಾಸ್ ಅವರು ಆರೋಪಿಸಿದ್ದು, ಅವರ ಬೆಂಬಲಕ್ಕೆ ನಿಂತಿರುವ ಸಹೋದರ ಹಾಸನ ಜೆಡಿಎಸ್ ಶಾಸಕ ಎಚ್.ಎಸ್.ಪ್ರಕಾಶ್ ಅವರು ಮಂಜು ಅವರ ಧಮ್ಕಿಗೆ ಬೆದರಿ ನನ್ನ ಸಹೋದರ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಎ ಮಂಜು ಅವರು, ನನಗೆ ಆ ಅಧಿಕಾರಿ ವಿರುದ್ಧ ದೂರು ಬಂದಿದ್ದಕ್ಕೆ ಎಚ್ಚರಿಕೆ ನೀಡಿದ್ದೆ. ತಪ್ಪು ತಿದ್ದಿಕೊಳ್ಳದೆ ಕೆಲಸ ಬಿಟ್ಟರೆ ಅದಕ್ಕೆ ನಾನು ಜವಾಬ್ದಾರನಲ್ಲ. ತಪ್ಪು ತಿದ್ದಿಕೋ, ಇಲ್ಲ ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದೆ. ಒಬ್ಬ ಸಚಿವನಾಗಿ ಅಧಿಕಾರಿಗಳಿಗೆ ಇಷ್ಟು ಹೇಳಬಾರದೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಾನು ಮೋಹನ್ ದಾಸ್ ಗೆ ಯಾವುದೇ ಧಮ್ಕಿ ಹಾಕಿಲ್ಲ ಎಂದು ಮಂಜು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com