"ನನಗೆ ಹೊರಗಿನಿಂದ ಏನೋ ಶಬ್ದ ಕೇಳಿಸಿತು" ಎನ್ನುವ ಅವರು ಮೊದಲನೇ ಮಹಡಿಗೆ ತೆರಳಿದೆ ಎನ್ನುತ್ತಾರೆ. ಆಗ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಸದಸ್ಯ ವಿಕ್ರಾಂತ್ ಕುಮಾರ್ ನನ್ನ ಬಳಿ ಬಂದು ನಜೀಬ್ ನಿಂದ ರಕ್ಷಿಸುವಂತೆ ಕೋರಿದನು. "ಆದರೆ ಅಲ್ಲಿ ಕಂಡದ್ದೇ ಬೇರೆ ಇತ್ತು. ನಜೀಬ್ ಮುಖ, ಬಾಯಿ ಮತ್ತು ಮೂಗಿನಿಂದ ರಕ್ತ ಸೋರುತ್ತಿತ್ತು. ನಾವು ವಾರ್ಡನ್ ಅವರನ್ನು ಕರೆದು ರಕ್ತ ತೊಳೆಯಲು ಶೌಚಾಲಯಕ್ಕೆ ಕರೆದುಕೊಂಡು ಹೋದೆವು. ಆದರೆ ಸ್ವಲ್ಪವೇ ಸಮಯದಲ್ಲಿ 25-30 ಜನ ವಿದ್ಯಾರ್ಥಿಗಳು ಎಲ್ಲಿಂದಲೋ ಬಂದು ನಜೀಬ್ ಗೆ ಮನಬಂದಂತೆ ಥಳಿಸಿದರು" ಎಂದು ತಿಳಿಸುತ್ತಾರೆ.