ನಮ್ಮ ದೇಶದಲ್ಲಿ ಸಾಕಷ್ಟು ಮಂದಿ ಹಸಿವಿನಿಂದ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೆಸ್ಟೋರೆಂಟ್ಗಳಲ್ಲಿ ಆಹಾರ ವ್ಯರ್ಥಗೊಳಿಸುತ್ತಿರುವುದು ಗಂಭೀರ ವಿಚಾರ. ಒಬ್ಬ ವ್ಯಕ್ತಿಗೆ ಇಂತಿಷ್ಟು ಆಹಾರ ನೀಡಬೇಕು ಎಂಬ ಕುರಿತು ನಿಯಮ ರೂಪಿಸಲು ಸಾಧ್ಯವೇ ಎಂಬ ಕುರಿತು ಚರ್ಚೆ ನಡೆಸಲು ಶೀಘ್ರದಲ್ಲೇ ಕಂಪನಿ, ರೆಸ್ಟೋರೆಂಟ್ ಮತ್ತು ಹೋಟೆಲ್ ಉದ್ದಿಮೆಗಳ ಮಾಲಿಕರನ್ನು ಸಭೆಗೆ ಕರೆಯಲಿದ್ದೇವೆ ಎಂದು ಪಾಸ್ವಾನ್ ತಿಳಿಸಿದ್ದಾರೆ.