ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಅಥವಾ ನಿರ್ಲಕ್ಷ್ಯದಿಂದ ಮಕ್ಕಳು ಸಾವನ್ನಪ್ಪಿಲ್ಲ, ಒಂದು ಮಗು ಮಿದುಳಿನ ಅಸಹಜ ಬೆಳವಣಿಗೆಯಿಂದ ಸಾವನ್ನಪ್ಪಿದೆ. ಮತ್ತೊಂದು ಪ್ರಕರಣದಲ್ಲಿ ತಾಯಿಯೊಬ್ಬಳು, ಮೂವರು ಮಕ್ಕಳಿಗೆ ಜನ್ಮವಿತ್ತಿದ್ದರು, ಅದರಲ್ಲಿ ಒಂದು ಮಗುವಿನ ತೂಕ ತುಂಬಾ ಕಡಿಮೆಯಿತ್ತು.ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು, ಹೀಗಾಗಿ ಮಗುವನ್ನು ಚಿಂತಾಮಣಿಯ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು ಎಂಗು ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.