ಆರ್ ಜೆ ಡಿ ಮುಖಂಡ ಮತ್ತು ಪತ್ರಕರ್ತನೊಬ್ಬರ ಕೊಲೆ ಆರೋಪ ಎದುರಿಸುತ್ತಿರುವ ಮೊಹಮದ್ ಶಹಾಬುದ್ದೀನ್
ಪ್ರಧಾನ ಸುದ್ದಿ
ಶಹಾಬುದ್ದೀನ್ ನನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲು ಆದೇಶಿಸಿದ ಸುಪ್ರೀಂ ಕೋರ್ಟ್
ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮುಖಂಡ ಮತ್ತು ಪತ್ರಕರ್ತನೊಬ್ಬರ ಕೊಲೆ ಆರೋಪ ಎದುರಿಸುತ್ತಿರುವ ಮೊಹಮದ್ ಶಹಾಬುದ್ದೀನ್ ನನ್ನು ಬಿಹಾರದ ಸಿವಾನ್ ಜೈಲಿನಿಂದ, ತಿಹಾರ್ ಕೇಂದ್ರ
ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮುಖಂಡ ಮತ್ತು ಪತ್ರಕರ್ತನೊಬ್ಬರ ಕೊಲೆ ಆರೋಪ ಎದುರಿಸುತ್ತಿರುವ ಮೊಹಮದ್ ಶಹಾಬುದ್ದೀನ್ ನನ್ನು ಬಿಹಾರದ ಸಿವಾನ್ ಜೈಲಿನಿಂದ, ತಿಹಾರ್ ಕೇಂದ್ರ ಖಾರಾಗೃಹಕ್ಕೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ವಿಚಾರಣೆ ಸುಗಮವಾಗಿ ಮತ್ತು ಮುಕ್ತವಾಗಿ ನಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಆದೇಶವನ್ನು ಬಿಹಾರ ಗೃಹ ಕಾರ್ಯಾಲಯಕ್ಕೆ ತಲುಪಿಸುವಂತೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ ರಾಯ್ ಒಳಗೊಂಡ ನ್ಯಾಯಪೀಠ ತಿಳಿಸಿದೆ.
ಈ ಸ್ಥಳಾಂತರಗೊಳ್ಳುವ ವೇಳೆಯಲ್ಲಿ ಶಹಾಬುದ್ದೀನ್ ಗೆ ಯಾವುದೇ ವಿಶೇಷ ಸವಲತ್ತುಗಳನ್ನು ನೀಡಬಾರದು ಎಂದು ಕೂಡ ಕೋರ್ಟ್ ಹೇಳಿದೆ.
ಕೊಲೆಯಾದ ಪತ್ರಕರ್ತ ರಾಜದೇವ್ ರಂಜನ್ ಅವರ ಪತ್ನಿ ಆಶಾ ರಂಜನ್ ಅವರು ಅರ್ಜಿ ಸಲ್ಲಿಸಿ ಮಾಡಿದ್ದ ಮನವಿಗೆ ಕೋರ್ಟ್ ಈ ಆದೇಶವಿತ್ತಿದೆ.
ಶಹಾಬುದ್ದೀನ್ ವಿರುದ್ಧ ಉಳಿದ ಪ್ರಕರಣಗಳನ್ನು ಇನ್ನು ನಾಲ್ಕು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಲು ಪಾಟ್ನಾ ಹೈಕೋರ್ಟ್ ಗೆ ಅಪೆಕ್ಸ್ ಕೋರ್ಟ್ ಸೂಚಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ