ಪಾಟ್ನಾ: ಸಮಾಜವಾದಿ ಪಕ್ಷ ಹೆಸರು ಮತ್ತು ಚಿಹ್ನೆಯನ್ನು ಉಳಿಸಿಕೊಳ್ಳಲು ಸಫಲರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಅಭಿನಂದಿಸಿರುವ ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ಸಮಾಜ ವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ತಮ್ಮ ಪುತ್ರನನ್ನು ಆಶೀರ್ವದಿಸಿ, ಮತ್ತೆ ಒಂದಾಗಬೇಕು ಎಂದು ಸೋಮವಾರ ಸಲಹೆ ನೀಡಿದ್ದಾರೆ.