ಇದೇ ವೇಳೆ ತಾವು ಆಮ್ ಆದ್ಮಿ ಪಕ್ಷದ ಸಂಚಾಲಕರಾಗಲು ಬಯಸಿದ್ದಾರೆ ಎಂಬುದನ್ನು ತಳ್ಳಿಹಾಕಿದ ಕುಮಾರ್ ವಿಶ್ವಾಸ್, 'ನಾನು ಈಗಾಗಲೇ ಅರವಿಂದ್ ಕೇಜ್ರಿವಾಲ್ ಮತ್ತು ಮನಿಶ್ ಸಿಸೋಡಿಯಾ ಅವರಿಗೆ 10 ಬಾರಿ ಹೇಳಿದ್ದೇನೆ. ನನಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಥವಾ ಸಂಚಾಲಕ ಹುದ್ದೆ ಬೇಡ'. ಅಲ್ಲದೆ ತಾವು ಯಾವುದೇ ಬೇರೆ ರಾಜಕೀಯ ಪಕ್ಷ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.