"ವಿವಾಹವಾಗಿ 5 ದಿನಗಳು ಮಾತ್ರ ಸಂತೋಷವಾಗಿದ್ದೆವು, ನಂತರದ ದಿನಗಳಲ್ಲಿ ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸತೊಡಗಿದರು. ಅಷ್ಟೇ ಅಲ್ಲದೇ ಹೆಚ್ಚು ವರದಕ್ಷಿಣೆ ನೀಡಲು ಸಿದ್ಧವಿದ್ದ ಮತ್ತೊಬ್ಬರನ್ನು ವಿವಾಹವಾಗಲು ನನಗೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ್ದರು. ನನಗೆ ಜೀವನ ನಡೆಸಲು ಆಧಾರವಿಲ್ಲ. ನನ್ನ ಪತಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು 15,000 ವೇತನ ಪಡೆಯುತ್ತಿದ್ದಾರೆ. ಆದ್ದರಿಂದ ನನಗೆ 10000 ರೂ ಜೀವನಾಂಶ ನೀಡುವಂತೆ ಆದೇಶಿಸಬೇಕು" ಎಂದು ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಆಕೆಯ ಆರೋಪಗಳನ್ನು ನಿರಾಕರಿಸಿದ್ದ ವ್ಯಕ್ತಿ "ನನ್ನ ಪತ್ನಿಗೆ ಈ ವಿವಾಹ ಇಷ್ಟವಿರಲಿಲ್ಲ. ಆಕೆ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದಳು ಪ್ರತಿದಿನವೂ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು, ಆಕೆ ದುಡಿಯುತ್ತಿರುವುದರಿಂದ ಜೀವನಾಂಶಕ್ಕೆ ಅರ್ಹಳಲ್ಲ" ಎಂದು ವಾದಿಸಿದ್ದರು.