೧೯, ನವೆಂಬರ್ ೧೯೦೪ರಲ್ಲಿ ಜನಿಸಿದ್ದ ಕುವೆಂಪು ಕರ್ನಾಟಕದ ಮನೆಮಾತು. ಕುವೆಂಪು ಅವರ ಶ್ರೀರಾಮಾಯಣದರ್ಶನಂ ಮಹಾಕಾವ್ಯ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿತ್ತು. ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಮಹಾ ಕಾದಂಬರಿಗಳು ಕುವೆಂಪುರವರ ಸುಪ್ರಸಿದ್ಧ ಕೃತಿಗಳು. ಕಾನೂರು ಹೆಗ್ಗಡತಿ ಸಿನೆಮಾವಾಗಿ ಕೂಡ ಮೂಡಿಬಂದಿರುವುದು ವಿಶೇಷ. ಕುವೆಂಪು ಅವರ ಕಾವ್ಯ ಮತ್ತು ನಾಟಕಗಳು ಕೂಡ ಕನ್ನಡಿಗರಿಗೆ ಚಿರಪರಿಚಿತ. ಕುವೆಂಪು ವಿರಚಿತ 'ಜೈ ಭಾರತ ಜನನಿಯ ತನುಜಾತೆ' ಕರ್ನಾಟಕದ ನಾಡಗೀತೆಯಾಗಿ ಕೂಡ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದೆ. ಹಲವು ವೈಚಾರಿಕ ಲೇಖಕನಗಳನ್ನು ಬರೆದಿರುವ ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಸಾಹಿತ್ಯ ಅಕಾಡಮಿ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೂ ಕುವೆಂಪು ಭಾಜನರಾಗಿದ್ದಾರೆ.