ಬೆಂಗಳೂರು: ಕರ್ನಾಟಕದ ಅತ್ಯಂತ ದುಬಾರಿ ರೈಲು ಗೋಲ್ಡನ್ ಚಾರಿಯಟ್(ಸುವರ್ಣ ರಥ)ನ ಪ್ರವಾಸ ದರದಲ್ಲಿ ಕಡಿತ ಮಾಡಿ ಜನತೆಯ ಕೈಗೆಟಕುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ವಾರಾಂತ್ಯದಲ್ಲಿ ದೇಶೀಯ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಸೇವೆ ಒದಗಿಸಲಿದೆ. ವಾರಾಂತ್ಯದಲ್ಲಿ ಎರಡು ರಾತ್ರಿ ಮತ್ತು ಒಂದು ಹಗಲಿಗೆ ರೈಲಿನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಪ್ರತಿ ವ್ಯಕ್ತಿಗೆ 30,000 ರೂಪಾಯಿ ದರ ವಿಧಿಸುತ್ತದೆ.