ಸಾಹಸಿ ಚಾರಣಿಗರಿಗೆ, ದೈವ ಭಕ್ತರಿಗೆ, ಪ್ರಕೃತಿ ಪ್ರಿಯರಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಉತ್ತಮ ತಾಣವಾಗಿದೆ. ಇದರಲ್ಲಿಯೂ ಶಿರಸಿ, ಕುಮಟಾ ಸುತ್ತಮುತ್ತಲಿನ ಪ್ರವಾಸಿ ತಾಣಗಳು ಪ್ರವಾಸಿಗರ ಕಣ್ಮನಗಳನ್ನು ತಣಿಸುವಲ್ಲಿ ಮುಂಚೂಣಿಯಲ್ಲಿರಲಿದೆ. ಮಳೆಗಾಲದ ಈ ದಿನಗಳಲ್ಲಿ ತೊಟ್ಟಿಕ್ಕುವ ಮಳೆ, ಮಂಜು ಮುಸುಕಿದ ಹಾದಿಯಲ್ಲಿ ಚಾರಣ ಮಾಡುವ ಮೋಜು ಅನುಭವಿಸಲು ಈ ಜಿಲ್ಲೆಗೆ ತೆರಳುವುದು ಉತ್ತಮ ಆಯ್ಕೆಯಾಗಲಿದೆ.