ಗೃಹ ಸಚಿವ ರಾಜನಾಥ್ ಸಿಂಗ್: ಪ್ರಧಾನಿ ಮೋದಿ ಸಂಪುಟದಲ್ಲಿ ನಂ.2 ನೇ ಸ್ಥಾನದಲ್ಲಿರುವ ರಾಜನಾಥ್ ಸಿಂಗ್ ಆಪರೇಷನ್ ಸ್ಮೈಲ್ ಕಾರ್ಯಾಚಾರಣೆಯನ್ನು ಪ್ರಾರಂಭಿಸಿ, ಗುಲಾಮಗಿರಿ, ಶೋಷಣೆಗೆ ಒಳಗಾಗಿದ್ದ ಹಾಗೂ ಕುಟುಂಬದಿಂದ ಕಳೆದುಹೋಗಿದ್ದ 19,000 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ. ದೇಶದ ಭದ್ರತೆ ವಿಷಯದಲ್ಲಿ ಜಾಗರೂಕರಾಗಿರುವ ರಾಜನಾಥ್ ಸಿಂಗ್ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಭಯೋತ್ಪಾದನೆ ಹೆಚ್ಚು ಸಂಭವಿಸಿಲ್ಲ ಎಂಬುದು ಪ್ಲಸ್ ಪಾಯಿಂಟ್. ಅಷ್ಟೇ ಅಲ್ಲದೇ ಜಮ್ಮು-ಕಾಶ್ಮೀರ, ತಮಿಳುನಾಡು ಸೇರಿದಂತೆ ಕೆಲವೆಡೆ ನೈಸರ್ಗಿಕ ವಿಪತ್ತು ಸಂಭವಿಸಿದಾಗ, ಯಶಸ್ವಿಯಾಗಿ ವಿಪತ್ತು ನಿರ್ವಹಣೆಯನ್ನು ಮಾಡಿದ್ದೂ ಗೃಹ ಸಚಿವರ ಸಾಮರ್ಥ್ಯವನ್ನು ತೋರಿಸುತ್ತದೆ.