ಲಕ್ಷ್ಮಿ ಮುನ್ನಾಲಾಲ್ ಹುಟ್ಟಿದ್ದು ದೆಹಲಿಯ ಬಡಕುಟುಂಬವೊಂದರಲ್ಲಿ. ಈಕೆ ಚೆನ್ನಾಗಿ ಹಾಡಬಲ್ಲಳು, ನೃತ್ಯ ಮಾಡಬಲ್ಲಳು. ಚಿತ್ರಕಲೆ, ಕವನ ರಚನೆ ಎಲ್ಲದರಲ್ಲೂ ಆಕೆ ಎತ್ತಿದ ಕೈ. ಏಳನೇ ತರಗತಿಯಲ್ಲಿರುವಾಗ ತನ್ನ ಗೆಳತಿಯ ಸಹೋದರನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಆತ ಲಕ್ಷ್ಮಿಯ ಮುಖಕ್ಕೆ ಆ್ಯಸಿಡ್ ಎರಚಿದ್ದ. ಮುಖ ಸುಟ್ಟು ವಿಕೃತವಾಗಿ ಬಿಟ್ಟಿತು. ಆಸ್ಪತ್ರೆಯಲ್ಲಿ ಹಲವಾರು ತಿಂಗಳು ಚಿಕಿತ್ಸೆ ಪಡೆದ ನಂತರ ಮನೆಗೆ ಬಂದು ಕನ್ನಡಿ ನೋಡಿದ ಲಕ್ಷ್ಮಿ ನನ್ನ ಮುಖವೆಲ್ಲಿ ಎಂದು ಕೇಳಿದ್ದಳು.