ಐಎಎಫ್‌ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ 'ಪ್ರಧಾನ ಗಗನಯಾತ್ರಿ' ಆಗಿ ಆಯ್ಕೆ

IAF ನ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶ ಯಾತ್ರೆಗೆ ಪ್ರಧಾನ ಗಗನಯಾತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮುಂಬರುವ ಇಂಡೋ-ಯುಎಸ್ ಮಿಷನ್‌ನ ಭಾಗವಾಗಲಿದ್ದಾರೆ ಎಂದು ಇಸ್ರೋ ಘೋಷಿಸಿದೆ.

ಶುಭಾಂಶು ಶುಕ್ಲಾ ಅವರು ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿರುವ ಎರಡನೇ ಭಾರತೀಯರಾಗಿದ್ದಾರೆ. ಪಿಎಂ ಮೋದಿ, ಜೋ ಬಿಡೆನ್ ಅವರು ಜೂನ್ 2023 ರಲ್ಲಿ ISS ಗೆ ISRO-NASA ಜಂಟಿ ಪ್ರಯತ್ನವನ್ನು ರೂಪಿಸಿ ಜಂಟಿ ಹೇಳಿಕೆಗೆ ಸಹಿ ಹಾಕಿದರು.

ರಾಷ್ಟ್ರೀಯ ಮಿಷನ್ ನಿಯೋಜನೆ ಮಂಡಳಿಯು ಈ ಮಿಷನ್‌ಗಾಗಿ ಎರಡು 'ಗಗನಯಾತ್ರಿ'ಗಳನ್ನು ಪ್ರಧಾನ, ಬ್ಯಾಕಪ್ ಮಿಷನ್ ಪೈಲಟ್‌ಗಳಾಗಿ ಶಿಫಾರಸು ಮಾಡಿದೆ. ಇವರಲ್ಲಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (ಪ್ರಧಾನ), ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ (ಬ್ಯಾಕಪ್) ಸೇರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com