ಸ್ವಂತ ಬುದ್ಧಿ ಬೇಕು: ಸಂಸತ್ ನಲ್ಲಿ ಅನುರಾಗ್ v/s ರಾಹುಲ್ ವಾಗ್ವಾದ!

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರ 'ಹಲ್ವಾ' ಭಾಷಣದ ಬಗ್ಗೆ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಜುಲೈ 30ರಂದು ಮಂಗಳವಾರ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸೋಮವಾರ (ಜುಲೈ 29) ಲೋಕಸಭೆಯಲ್ಲಿ ಮಾತನಾಡಿದ ಗಾಂಧಿ, ಸಾಂಪ್ರದಾಯಿಕ 'ಹಲ್ವಾ' ಸಮಾರಂಭವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ಬಜೆಟ್ ತಯಾರಿಕೆ ತಂಡದಲ್ಲಿ ವೈವಿಧ್ಯತೆಯ ಕೊರತೆ ಇರುವುದಾಗಿ ಆರೋಪಿಸಿದರು.

ಮಂಗಳವಾರ, ಠಾಕೂರ್ ಅವರು ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ನಡೆದ ಹಗರಣಗಳನ್ನು ಪಟ್ಟಿ ಮಾಡಿದರು. "ರಾಹುಲ್ ಜೀ, ನೀವು 'ಹಲ್ವಾ' (ಸಿಹಿ) ಬಗ್ಗೆ ಮಾತನಾಡಿದ್ದೀರಿ. ಬೋಫೋರ್ಸ್ ಹಗರಣದಿಂದ 'ಹಲ್ವಾ' ಸಿಕ್ಕಿದ್ದು ಯಾರಿಗೆ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com