Watch | ರಕ್ತ ಹರಿಯುವುದಾದರೆ, ಅವರ ಕಡೆಯಲ್ಲೇ ಹೆಚ್ಚು ಹರಿಯಬಹುದು...: Shashi Tharoor

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ನಾಗರಿಕರ ಹತ್ಯೆ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.

ಈ ಬಗ್ಗೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಸ್ಪಷ್ಟ ಮಿಲಿಟರಿ ಪ್ರತಿಕ್ರಿಯೆ ಅನಿವಾರ್ಯ ಎಂದು ಹೇಳಿದ್ದಾರೆ.

ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ಬಗ್ಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್ ಭುಟ್ಟೋ-ಜರ್ದಾರಿ ಅವರ "ರಕ್ತ ಹರಿಯುತ್ತದೆ" ಎಂಬ ಹೇಳಿಕೆಗೆ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.

"ಇದು ಕೇವಲ ಉದ್ರೇಕಕಾರಿ ಮಾತು. ಪಾಕಿಸ್ತಾನಿಗಳು ಭಾರತೀಯರನ್ನು ಶಿಕ್ಷೆಯಿಲ್ಲದೆ ಕೊಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ನಾವು ಪಾಕಿಸ್ತಾನಿಗಳಿಗೆ ಏನನ್ನೂ ಮಾಡಲು ಬಯಸುವುದಿಲ್ಲ. ಆದರೆ ಅವರು ನಮಗೆ ಏನಾದರೂ ಮಾಡಿದರೆ, ಪ್ರತಿಕ್ರಿಯೆಗೆ ಸಿದ್ಧರಾಗಿರಿ.

ರಕ್ತ ಹರಿಯುವುದಾದರೆ, ಅದು ನಮ್ಮದಕ್ಕಿಂತ ಅವರ ಕಡೆಯಿಂದ ಹೆಚ್ಚು ಹರಿಯಬಹುದು" ಎಂದು ತರೂರ್ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com