Watch | ಪಾಶ್ಚಿಮಾತ್ಯ ಪತ್ರಕರ್ತರಿಗೆ MEA ಸಿಬಿ ಜಾರ್ಜ್ ತಕ್ಕ ಪಾಠ!

ಭಾರತದ ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಿದ್ದು, ಧಾರ್ಮಿಕ ಮತ್ತು ಅಲ್ಪಸಂಖ್ಯಾತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಡಚ್ ಪ್ರಧಾನಿ ರಾಬ್ ಜೆಟ್ಟನ್ ಅವರ ಹೇಳಿಕೆಗಳನ್ನು ನವದೆಹಲಿ ತಿರಸ್ಕರಿಸಿದೆ.

ದೇಶವು ಎಲ್ಲರಿಗೂ ಮುಕ್ತ ಸ್ವಾತಂತ್ರ್ಯದ ಹಕ್ಕು ನೀಡಿರುವ "ಚೈತನ್ಯಶೀಲ ಪ್ರಜಾಪ್ರಭುತ್ವ" ರಾಷ್ಟ್ರ ಎಂದು ಪ್ರತಿಪಾದಿಸಿದೆ.

ಪ್ರಧಾನಿ ನರೇಂದ್ರ ಮೋದಿಯ ನೆದರ್‌ಲ್ಯಾಂಡ್ಸ್ ಭೇಟಿ ಸಂದರ್ಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ಅಧಿಕಾರಿ ಸಿಬಿ ಜಾರ್ಜ್ ಮಾತನಾಡಿದರು.

ದೇಶದ ಬಗ್ಗೆ ಸರಿಯಾಗಿ ತಿಳಿಯದೆ ಈ ರೀತಿಯ ಹೇಳಿಕೆ ನೀಡಲಾಗಿದೆ. ಭಾರತದ ನಾಗರಿಕತೆ ಮತ್ತು ಬಹುತ್ವ ಆಳವಾದದ್ದು ಎಂದರು.

ವಿಶ್ವದ ಒಟ್ಟು ಜನಸಂಖ್ಯೆಯ ಆರನೇ ಒಂದು ಭಾಗದಷ್ಟು ಭಾರತವನ್ನು ಹೊಂದಿದ್ದರೂ, ವಿಶ್ವದ ಸಮಸ್ಯೆಗಳಲ್ಲಿ ಆರನೇ ಒಂದು ಭಾಗದಷ್ಟದ್ದರಲ್ಲಿ ಕೂಡ ಭಾರತದ ಪಾತ್ರ ಇಲ್ಲ ಎಂದು ಸಿಬಿ ಜಾರ್ಜ್ ನೆನಪಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com