ನಿರ್ಣಾಯಕ ಘಟ್ಟವಾಗಿದ್ದ ಟೈಗರ್ ಹಿಲ್ ಕದನವನ್ನು ನೇರ ಪ್ರಸಾರವಾಗಿದ್ದು, ಕಾರ್ಗಿಲ್ ಯುದ್ಧದ ವಿಜಯೋತ್ಸವದ ಹೆಮ್ಮೆಯ ಸಂಗತಿಯಾಗಿತ್ತು. ಅಷ್ಟೇ ಅಲ್ಲದೇ ಕಾರ್ಗಿಲ್ ಯುದ್ಧದ ವೇಳೆಯಲ್ಲಿ ಟೈಗರ್ ಹಿಲ್ ನಲ್ಲಿ ಭಾರತದ ಧ್ವಜ ಹಾರಿಸುತ್ತಿದ್ದಂತೆಯೇ ಪಾಕಿಸ್ತಾನಕ್ಕೆ ಪೀಕಲಾಟ ಪ್ರಾರಂಭವಾಗಿತ್ತು. ಟೈಗರ್ ಹಿಲ್ ನಲ್ಲಿ ಭಾರತದ ಧ್ವಜ ಹಾರಿ ಯುದ್ಧ ನಿರ್ಣಾಯಕ ಘಟ್ಟ ತಲುಪುತ್ತಿದ್ದಂತೆಯೇ ಭಯಗೊಂಡಿದ್ದ ಪಾಕಿಸ್ತಾನ ಮರ್ಯಾದೆ ಉಳಿಸಿ ಎಂದು ಅಮೆರಿಕಾದ ಮೊರೆ ಹೋಗಿತ್ತು. ಇತ್ತ ಭಾರತೀಯ ಯೋಧರು ಟೈಗರ್ ಹಿಲ್ ನ್ನು ವಶಪಡಿಸಿಕೊಳ್ಳುತ್ತಿದ್ದಂತೆಯೇ ಅತ್ತ ಅಮೆರಿಕಾಗೆ ತೆರಳಿದ್ದ ಪಾಕ್ ಪ್ರಧಾನಿ, ಹೇಗಾದರೂ ಮಾಡಿ ಪಾಕಿಸ್ತಾನದ ಮರ್ಯಾದೆ ಉಳಿಸಿ ಎಂದು ಮೊರೆ ಇಟ್ಟಿದ್ದರು.