ಇಸ್ತಾಂಬುಲ್: ಆತ್ಮಹತ್ಯೆಗೆ ಮುಂದಾಗಿದ್ದ ಯುವಕ ನನ್ನು ಟರ್ಕಿಯ ಅಧ್ಯಕ್ಷ ರೆಸೆಪ್ ತಯೀಪ್ ಇಡೋಗನ್ ರಕ್ಷಿಸಿದ್ದಾರೆ. ಸ್ತಾಂಬುಲ್ ನ ಬಾಸ್ಪರಸ್ ಸೇತುವೆ ಪ್ರದೇಶಲ್ಲಿ ಅಧ್ಯಕ್ಷ ತಯೀಪ್ ತೆರಳುತ್ತಿದ್ದರು.
ಆಗ ಯುವಕ ಸೇತುವೆಯಿಂದ ಧಮುಕಲು ಮುಂದಾಗಿದ್ದ. ಅದನ್ನು ಕಂಡ ಅವರು ಆತನನ್ನು ತಡೆಯಲು ಮುಂದಾದರು. ಆತ ಒಪ್ಪದಿದ್ದರೂ ಸ್ವತಃ ತಯೀಪ್ ಅವರೇ ಸೇತುವೆ ಬಳಿ ತೆರಳಿ ಆತನ ಮನವೊಲಿಸಿ ಆತ್ಮಹತ್ಯೆ ಯತ್ನ ಕೈಬಿಡುವಂತೆ ಮಾಡಿದರು.
ಕೌಟುಂಬಿಕ ಕಾರಣದಿಂದ ಆತ ಆತಹತ್ಯೆಗೆ ಮುಂದಾಗಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಘಟನೆಗೆ ರಷ್ಯವೇ ಕಾರಣ ಎಂದು ಟರ್ಕಿ ಪ್ರಧಾನಿ ಪ್ರತಿಪಾದಿಸಿದ್ದಾರೆ.