ವಿಮಾನ ತುರ್ತು ಭೂಸ್ಪರ್ಷ: ಪೈಲಟ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಪ್ರಕರಣ
ಇಸ್ಲಾಮಾಬಾದ್: ಲಾಹೋರ್ ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಷ ಮಾಡಿದ್ದಕ್ಕಾಗಿ ಪಾಕಿಸ್ತಾನಿ ಪೈಲಟ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶಹೀನ್ ಏರ್ ಫ್ಲೈಟ್ ನ ಪೈಲಟ್ ನ.3 ರಂದು ವಿಮಾನವನ್ನು ಲಾಹೋರ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರು. ತುರ್ತು ಭೂಸ್ಪರ್ಷದ ಪರಿಣಾಮ 10 ಜನ ಪ್ರಯಾಣಿಕರಿಗೆ ಗಾಯಗಳಾಗಿತ್ತು. ಶಹೀನ್ ಏರ್ ಫ್ಲೈಟ್ ನ ಪೈಲಟ್ ದಣಿದಿದ್ದೂ ಅಲ್ಲದೇ ಮದ್ಯಪಾನ ಮಾಡಿದ್ದರಿಂದ ಮತ್ತಷ್ಟು ಹೆಚ್ಚಿನ ಹಾನಿಯುಂಟಾಗುವ ಸಾಧ್ಯತೆ ಇತ್ತು ಎಂದು ನಾಗರಿಕ ವಿಮಾನ ಪ್ರಾಧಿಕಾರದ ಮಹಾನಿರ್ದೇಶಕರು ತಿಳಿಸಿದ್ದಾರೆ.
ಈ ಬಗ್ಗೆ ಸಂಪಾದಕೀಯ ಬರೆದಿರುವ ಪಾಕಿಸ್ತಾನದ ಪತ್ರಿಕೆ ದಿ ನೇಷನ್, ಕಳೆದ ಕೆಲ ವರ್ಷಗಳಲ್ಲಿ ಖಾಸಗಿ ಸಂಸ್ಥೆಗಳ ವಿಮಾನಗಳು ಅಪಘಾತಕ್ಕೀಡಾಗಿದ್ದು ಪ್ರಯಾಣಿಕರ ಭದ್ರತೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದೆ. ಈ ಹಿಂದೆ ಪಾಕಿಸ್ತಾನ್ ಅಂತಾರಾಷ್ಟ್ರೀಯ ಏರ್ ಲೈನ್ಸ್ ನ ಪೈಲಟ್ ಕಡ್ಡಾಯ ವಿಶ್ರಾ೦ತಿಯನ್ನೂ ಪಡೆಯದೇ ಟ್ರಾನ್ಸ್-ಅಟ್ಲಾಂಟಿಕ್ ದೀರ್ಘ-ಪ್ರಯಾಣದ ವಿಮಾನ ಚಾಲನೆ ಮಾಡಿ ಗಂಭೀರ ವಾಯು ಸುರಕ್ಷತಾ ಅಪಾಯ ಎದುರಾಗುವಂತೆ ಮಾಡಿದ್ದರು. ಇಂತಹ ಪ್ರಕರಣಗಳ ಬಗ್ಗೆ ವಿಮಾನಯಾನ ಪ್ರಾಧಿಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಪತ್ರಿಕೆ ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ