ಆತ್ಮಾಹುತಿ ಬಾಂಬರ್ ಬಾಂಬ್ ಸ್ಫೋಟಿಸಲು ಮಾನಸಿಕ ಒತ್ತಡ ಕಾರಣ?

ನನ್ನ ಮಗ ಯಾರನ್ನೂ ಹತ್ಯೆಗೈಯ್ಯಬೇಕೆಂಬ ಉದ್ದೇಶದಿಂದ ಬಾಂಬ್ ಸ್ಫೋಟಿಸಿಲ್ಲ. ಆತ ಈ ಕೃತ್ಯವೆಸಗಿದ್ದು ಮಾನಸಿಕ...
ಪ್ಯಾರೀಸ್ ದಾಳಿ
ಪ್ಯಾರೀಸ್ ದಾಳಿ
Updated on
ಪ್ಯಾರೀಸ್: ನನ್ನ ಮಗ ಯಾರನ್ನೂ ಹತ್ಯೆಗೈಯ್ಯಬೇಕೆಂಬ ಉದ್ದೇಶದಿಂದ ಬಾಂಬ್ ಸ್ಫೋಟಿಸಿಲ್ಲ. ಆತ ಈ  ಕೃತ್ಯವೆಸಗಿದ್ದು ಮಾನಸಿಕ ಒತ್ತಡದಿಂದ ಎಂದು ಪ್ಯಾರೀಸ್ ಆತ್ಮಾಹುತಿ ಬಾಂಬರ್‌ನ ತಾಯಿ ಹೇಳಿದ್ದಾರೆ.
31ರ ಹರೆಯದ ಇಬ್ರಾಹಿಂ ಅದ್ದೇಸ್ಲಾಮ್ ಎಂಬಾತ ಶುಕ್ರವಾರ ಪ್ಯಾರೀಸ್‌ನ ಕಫೆ ಕಾಂಪ್ಟೈರ್ ವೊಲ್ಟೈರ್ ನಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದ. ಪ್ಯಾರೀಸ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ 129 ಮಂದಿ ಸಾವಿಗೀಡಾಗಿದ್ದರು.
ದಾಳಿ ನಡೆದ ಮರುದಿನವೇ ಇಬ್ರಾಹಿಂನ ಸಹೋದರ ಮೊಹಮ್ಮದ್ ಅದ್ದೇಸ್ಲಾಮ್ ನ್ನು ಬ್ರೂಸೆಲ್ಸ್ ನ ಮೊಲೇನ್‌ಬೀಕ್‌ನಲ್ಲಿ ಬಂಧಿಸಲಾಗಿತ್ತು. ಅದೇ ವೇಳೆ ಈತನ ಇನ್ನೊಬ್ಬ ಸಹೋದರ ಸಲ್ಲಾಹ್ ತಲೆ ಮರೆಸಿಕೊಂಡಿದ್ದಾನೆ.
ಜನರನ್ನು ಹತ್ಯೆಗೈಯ್ಯಬೇಕೆಂಬುದು ಖಂಡಿತವಾಗಿಯೂ ಆತನ ಉದ್ದೇಶವಾಗಿರಲಿಲ್ಲ. ಮಾನಸಿಕ ಒತ್ತಡವೇ ಇದಕ್ಕೆಲ್ಲ ಕಾರಣ ಎಂದು ಇಬ್ರಾಹಿಂ ಅದ್ದೇಸ್ಲಾಮ್ ನ ತಾಯಿ ಹೇಳಿದ್ದನ್ನು ಮಾಧ್ಯಮವೊಂದು ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com