ಗೀಲಾನಿಗೆ ಪಾಕ್ ಆಹ್ವಾನ

ಪ್ರತ್ಯೇಕತಾವಾದಿ ನಾಯಕರನ್ನು ಓಲೈಸುವ ಮಂತ್ರವನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫ್...
ಸಯ್ಯದ್ ಅಲಿ ಶಾ ಗಿಲಾನಿ
ಸಯ್ಯದ್ ಅಲಿ ಶಾ ಗಿಲಾನಿ
ಶ್ರೀನಗರ: ಪ್ರತ್ಯೇಕತಾವಾದಿ ನಾಯಕರನ್ನು ಓಲೈಸುವ ಮಂತ್ರವನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫ್ ಪುನಃ ಪಠಿಸಿದ್ದಾರೆ. ಅವರು ಕಾಶ್ಮೀರದ ತೀರ್ವವಾದಿ ಹುರಿಯತ್ ನಾಯಕ ಅಯ್ಯದ್ ಅಲಿ ಶಾ ಗೀಲಾನಿ ಅವರನ್ನು ತಮ್ಮಲ್ಲಿಗೆ ಬರುವಂತೆ ಆಹ್ವಾನಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 
ದೆಹಲಿಯಲ್ಲಿರುವ ಗೀಲಾನಿ ನಿವಾಸಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಹೈ ಕಮಿಷನರ್ ಅಬ್ದುಲ್ ಬಾಸಿತ್, ನವಾಜ್ ಶರೀಫರ್ ಆಹ್ವಾನ ಪತ್ರವನ್ನು ಅವರಿಗೆ ನೀಡಿದರು ಎಂದು ಹುರಿಯತ್ ನ ವಕ್ತಾರರೊಬ್ಬರು ತಿಳಿಸಿದ್ದಾರೆ. 
ಕಾಶ್ಮೀರವನ್ನು ಹೊರತಪಡಿಸಿ ಉಭಯ ಪಕ್ಷಗಳ ನಡುವೆ ಮಾತುಕತೆ ಸಾಧ್ಯವಿಲ್ಲ ಎಂದು ಪತ್ರದಲ್ಲಿ ಶರೀಫ್ ತಿಳಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ. ಗೀಲಾನಿ ಪಾಕಿಸ್ತಾನಕ್ಕೆ ಭೇಟಿ ನೀಡಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com