ಸಿಂಗಾಪುರ್ ನಲ್ಲಿ ಮಹಾ ಚುನಾವಣೆ: 21 ಭಾರತೀಯರಿಂದ ಸ್ಪರ್ಧೆ

ಸಿಂಗಾಪುರದಲ್ಲಿ ಸೆ.11ರಂದು ನಡೆಯಲಿರುವ ಮಹಾ ಚುನಾವಣೆಯಲ್ಲಿ ಭಾರತೀಯ ಮೂಲದ 21 ಅಭ್ಯರ್ಥಿಗಳು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಸಿಂಗಾಪುರ: ಸಿಂಗಾಪುರದಲ್ಲಿ ಸೆ.11ರಂದು ನಡೆಯಲಿರುವ ಮಹಾ ಚುನಾವಣೆಯಲ್ಲಿ ಭಾರತೀಯ ಮೂಲದ 21 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಕಾನೂನು, ವಿದೇಶಾಂಗ ಸಚಿವರಾದ ಕೆ.ಷಣ್ಮುಗಂ, ಎಸ್. ಈಶ್ವರನ್, ವಿವಿಯನ್ ಬಾಲ ಕೃಷ್ಣನ್ ಇವರಲ್ಲಿ ಪ್ರಮುಖರು. ಇವರೆಲ್ಲ ಆಡಳಿ ತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿ (ಪಿಎಪಿ)ಗೆ ಸೇರಿದವರು.

ಸಿಂಗಾಪುರವನ್ನು 50ಕ್ಕೂ ಹೆಚ್ಚು ವರ್ಷಗಳಿದಂ ಆಳುತ್ತಾ ಬಂದಿರುವ ಪಿಎಂಪಿ ಈ ಬಾರಿಯೂ ಗೆಲವಿನ ನಿರೀಕ್ಷೆಯಲ್ಲಿದೆ. ಹೆಚ್ಚುತ್ತಿರುವ ವಿದೇಶಿಗರು, ಜೀವನ ನಿರ್ವಹಣೆ ವೆಚ್ಚದಲ್ಲಿ ಆಗುತ್ತಿರುವ ಏರಿಕೆ ಈ ಬಾರಿಯ ಚುನಾವಣೆಯ ಪ್ರಮುಖ ವಿಚಾರ ಆಗುವ ಸಾಧ್ಯತೆ ಇದೆ.

ಈಗಾಗಲೇ ಪ್ರತಿಪಕ್ಷಗಳು ಈ ವಿಚಾರಕ್ಕಾಗಿ ಆಡಳಿತಾ ರೂಢ¸ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com