ದೇಶದ ಉಗ್ರಗಾಮಿಗಳನ್ನು ಕೊನೆಗಾಣಿಸಲು ಪಣ ತೊಟ್ಟ ಪಾಕಿಸ್ತಾನ ಸೇನೆ

ಪಾಕಿಸ್ತಾನದಲ್ಲಿ ನಡೆಯುತ್ತಿರುವ 'ಜರ್ಬ್-ಎ-ಅಜಬ್' ಕಾರ್ಯಾಚರಣೆಯಿಂದ ಒದಗಿರುವ ಉಪಯೋಗಗಳು ಮತ್ತು ಪರಿಣಾಮಗಳ ಬಗ್ಗೆ ಬುಧವಾರ ತೃಪ್ತಿ ವ್ಯಕ್ತಪಡಿಸಿರುವ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ 'ಜರ್ಬ್-ಎ-ಅಜಬ್' ಕಾರ್ಯಾಚರಣೆಯಿಂದ ಒದಗಿರುವ ಉಪಯೋಗಗಳು ಮತ್ತು ಪರಿಣಾಮಗಳ ಬಗ್ಗೆ ಬುಧವಾರ ತೃಪ್ತಿ ವ್ಯಕ್ತಪಡಿಸಿರುವ ಪಾಕಿಸ್ತಾನದ ಸೇನಾ ಅಧ್ಯಕ್ಷ ಜನರಲ್ ರಶೀಲ್ ಶರೀಫ್ ತಮ್ಮ ದೇಶದಿಂದ ಎಲ್ಲ ಉಗ್ರಗಾಮಿಗಳನ್ನು ಮುಕ್ತಿಗೊಳಿಸಲು ಸೇನೆ ಪಣ ತೊಟ್ಟಿರುವುದಾಗಿ ಹೇಳಿದ್ದಾರೆ.

ಉಗ್ರಗಾಮಿಗಳ ವಿರುದ್ಧ ನಡೆಯುತ್ತಿರುವ 'ಜರ್ಬ್-ಎ-ಅಜಬ್' ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಲು ನೈಋತ್ಯ ಪರ್ವತಗಳೆಡೆಗೆ ಪ್ರವಾಸ ಮಾಡಿದ್ದ ಜನರಲ್ ರಶೀಫ್ ಮೇಲಿನ ಮಾತುಗಳನ್ನು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದ ಗಡಿಯಲ್ಲಿರುವ ಒಳ ಅರಣ್ಯ ಪ್ರದೇಶಗಳಾದ ಶವಲ್ ಕಣಿವೆ ಉಗ್ರರು ನುಸುಳುವ ನೆಚ್ಚಿನ ತಾಣವಾಗಿದೆ ಎಂದು 'ಜರ್ಬ್-ಎ-ಅಜಬ್' ಕಮ್ಯಾಂಡರ್, ಜನರಲ್ ರಶೀಫ್ ಅವರಿಗೆ ತಿಳಿಸಿದ್ದು, ಉತ್ತರ ವಾಜಿರಿಸ್ಥಾನದಲ್ಲಿ ಉಗ್ರರ ಅಟ್ಟಹಾಸವನ್ನು ಹತ್ತಿಕ್ಕುತ್ತಿರುವುದಾಗಿ ತಿಳಿಸಿದ್ದಾರೆ.

ಉತ್ತರ ವಾಜಿರಿಸ್ಥಾನದಲ್ಲಿ ಉಳಿದ ಉಗ್ರರ ನಾಶಕ್ಕೆ ಮುಂದುವರೆಯುವಂತೆ ಪಡೆಗಳಿಗೆ ಜನರಲ್ ಶರೀಫ್ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com