ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಅರ್ಚಕನ ಮೇಲೆ ಹಲ್ಲೆ, ಸ್ಥಿತಿ ಗಂಭೀರ

ಮುಸ್ಲಿಂ ರಾಷ್ಟ್ರವಾಗಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ಸಾಮಾನ್ಯವಾಗಿದೆ. ಎರಡು ದಿನಗಳ ಹಿಂದಷ್ಟೇ ಬಾಂಗ್ಲಾದಲ್ಲಿ ಹಿಂದೂ ಅರ್ಚಕನ...
ಹಿಂದೂ ಅರ್ಚಕ
ಹಿಂದೂ ಅರ್ಚಕ
Updated on
ಢಾಕಾ: ಮುಸ್ಲಿಂ ರಾಷ್ಟ್ರವಾಗಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ಸಾಮಾನ್ಯವಾಗಿದೆ. ಎರಡು ದಿನಗಳ ಹಿಂದಷ್ಟೇ ಬಾಂಗ್ಲಾದಲ್ಲಿ ಹಿಂದೂ ಅರ್ಚಕನ ಕೊಲೆ ಮಾಡಿದ್ದ ಉಗ್ರರು ಮತ್ತೋರ್ವ ಹಿಂದೂ ಅರ್ಚಕನ ಮೇಲೆ ಹಲ್ಲೆ ಮಾಡಿದ್ದಾರೆ. 
ಉಗ್ರರ ಹಲ್ಲೆಯಿಂದಾಗಿ ನೈಋತ್ಯ ಬಾಂಗ್ಲಾದ ಸಖ್ತಿರಾ ಜಿಲ್ಲೆಯಲ್ಲಿರುವ ರಾಧಾ ಗೋವಿಂದ ದೇವಾಲಯದ 48ರ ಹರೆಯದ ಬಾಬಾ ಸಿಂಧುರಾಯ್ ಸ್ಥಿತಿ ಗಂಭೀರವಾಗಿದೆ. 
ಅರ್ಚಕನ ಎದೆಯ ಭಾಗಕ್ಕೆ ಬಲವಾದ ಏಟು ಬಿದ್ದಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಬಾಬಾ ಸಿಂಧುರಾಯ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕಾರ್ಯಕರ್ತರೇ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com