ನಾಯ್ ಪಿಐ ತಾವ್: ಬೌದ್ಧ ಧರ್ಮ ಪ್ರಧಾನವಾಗಿರುವ ಮಯನ್ಮಾರ್ ಗೆ ಪ್ರವಾಸಕ್ಕೆ ಬಂದಿದ್ದ ಸ್ಪೇನ್ ನಾಗರಿಕ ಎಡಗಾಲಿನ ಮೇಲೆ ಬುದ್ಧನ ಅಚ್ಚೆ ಹಾಕಿಸಿಕೊಂಡಿದ್ದರಿಂದ, ಅದು ಮನನೋಯಿಸುವ ನಡೆಯೆಂದು ಬಗೆದು ದೇಶದಿಂದ ಹೊರಕಳಿಸಿರುವ ಘಟನೆ ನಡೆದಿದೆ ಎಂದು ರಾಜತಾಂತ್ರಿಕ ಮೂಲಗಳಿಂದ ತಿಳಿದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.