ಸೋಮವಾರ ರಾತ್ರಿ 9.15 (ಸ್ಥಳೀಯ ಕಾಲಮಾನ) ರ ಸುಮಾರಿಗೆ ಬವೇರಿಯಾ ರಾಜ್ಯದ ತ್ರಿಚ್ಲಿಂಗೆನ್ ಮತ್ತು ವುರೆಜ್ಬರ್ಗ್ ನಗರದ ನಡುವೆ ರೈಲು ಸಂಚರಿಸುವಾಗ ಈ ಘಟನೆ ಘಟಿಸಿತ್ತು. ರೈಲು ವುರೆಜ್ಬರ್ಗ್ ರೈಲು ನಿಲ್ದಾಣಕ್ಕೆ ಆಗಮಿಸುವ ಮುನ್ನ ಯುವಕ ‘ಅಲ್ಲಾಹು ಅಕ್ಬರ್’ ಎಂದು ಘೊಷಣೆ ಕೂಗಿ ಪ್ರಯಾಣಿಕರ ಮೇಲೆ ಹಲ್ಲಿ ನಡೆಸಿದ. ಇದೊಂದು ಸಂಭಾವ್ಯ ಐಸಿಸ್ ದಾಳಿ ಇರಬಹುದು ಎಂದು ಶಂಕಿಸಲಾಗಿತ್ತು. ದಾಳಿಯ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನ್ನು ಗುಂಡಿಕ್ಕಿ ಕೊಂದಿದ್ದರು. ಯುವಕ ಒಚ್ಸೆನ್ಫುರ್ಟ್ನ ಸಮೀಪ ವಾಸಿಸುತ್ತಿದ್ದ ಎಂದು ಬವೇರಿಯಾ ರಾಜ್ಯದ ಆಂತರಿಕ ಸಚಿವ ಜೋಚಿಮ್ ಹೆರ್ರಮನ್ ತಿಳಿಸಿದ್ದಾರೆ.