ಮಲೇಷ್ಯಾ ಮೂಲದ ಶ್ರೀಮಂತ ಸಿಖ್ ಗುರುದಿತ್ ಸಿಂಗ್ ಎಂಬಾತ ವ್ಯಾಂಕೊವರ್ನ ಜನಾಂಗೀಯ ಕಾಯಿದೆ ವಿರೋಧಿಸಿ 376 ಭಾರತೀಯರನ್ನು ಹಾಂಕಾಂಗ್ ಮಾರ್ಗವಾಗಿ ವ್ಯಾಂಕೊವರ್ಗೆ ಕರೆದೊಯ್ಯಲು 1914ರಲ್ಲಿ ಜಪಾನ್ನ ಕೊಮಗಟ ಹಡಗನ್ನು ಬಾಡಿಗೆ ಪಡೆದಿದ್ದ. ಆದರೆ ವ್ಯಾಂಕೊವರ್ ಬಂದರಿನ ಬಳಿ ಬಂದ ಆ ಹಡಗು ನಿಲುಗಡೆಗೆ ಅವಕಾಶ ನೀಡದೇ, ಎರಡು ತಿಂಗಳು ಕಾಯಿಸಿದ ನಂತರ ಬಲವಂತವಾಗಿ ಭಾರತಕ್ಕೆ ವಾಪಸು ಕಳುಹಿಸಲಾಗಿತ್ತು.