ಎಡಪಕ್ಷಗಳೂ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು 8 ಮುಖಂಡರು ರಾಜನಾಥ್ ಸಿಂಗ್ ನೇತೃತ್ವದ ನಿಯೋಗದಲ್ಲಿ ಕ್ಯೂಬಾಗೆ ತೆರಳಿದ್ದಾರೆ. ಲೋಕಸಭೆಯ ಉಪಸಭಾಪತಿ ಎಂ ತಂಬಿದುರೈ, ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಕಾರ್ಯದರ್ಶಿ ಡಿ ರಾಜ, ಬಿಜೆಡಿ ಸಂಸದ ಜಿನಾ ಹಿಕಾಕ, ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ ಖಾನ್ ರಾಜನಾಥ್ ಸಿಂಗ್ ಅವರೊಂದಿಗೆ ತೆರಳಿದ್ದಾರೆ.