ಭಾರತ ಕೇಳುತ್ತಿರುವ ಸುಸ್ತಿದಾರರ ಪಟ್ಟಿಯಲ್ಲಿ ವಿಜಯ್ ಮಲ್ಯ ಪ್ರಮುಖವಾಗಿದ್ದು, ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಸಾಕ್ಷ್ಯಾಧಾರಗಳನ್ನು ಪಡೆದಿರುವ ಅಲ್ಲಿನ ಕೋರ್ಟ್ ನ ವಿಚಾರಣೆಯನ್ನು ಮುಂದೂಡಲಾಗಿದೆ. ಡಿ.4 ರಂದು ಮುಂದಿನ ವಿಚಾರಣೆ ನಡೆಯುವವರೆಗೂ ವಿಜಯ್ ಮಲ್ಯಾಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ವಕೀಲರು ನ.17 ರ ವೇಳೆಗೆ ಪ್ರಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ಸಲ್ಲಿಕೆ ಮಾಡಬೇಕಿದ್ದು, ನ.27 ಕ್ಕೆ ಭಾರತ ಸರ್ಕಾರ ಪ್ರತಿಕ್ರಿಯೆ ನೀಡಬೇಕಾಗಿದೆ.